ಸಹಸ್ರಮಾನಕೆ ನಮನ

ಶತಮಾನಕೆ ನಮನ
ಸಹಸ್ರ ಮಾನಕೆ ನಮನ

ಹೊಸ ಶತಮಾನಕೆ ಹೊಸ ಆಲೋಚನೆ
ಹೊಸ ಚಿಂತನೆ ಬರಲಿ
ಶತಶತಮಾನದ ಅಂಧಶ್ರದ್ಧೆಗಳು
ಇಂದೇ ತೊಲಗಿ ಬಿಡಲಿ

ಮನುಜರ ನಡುವಣ ಅಡ್ಡಗೋಡೆಗಳು
ಕುಸಿದು ಬಿಡಲಿ ಇಂದೇ
ಜಾತಿ ಪಂಥ ಮತ ಧರ್ಮಗಳೆಲ್ಲವು
ಅನುಭಾವಿಗೆ ಒಂದೇ

ದೇಶ ದೇಶಗಳ ಗಡಿಗಳ ಯೋಧರು
ಬಂದೂಕನು ಬದಿಗಿಟ್ಟು
ಶಾಶ್ವತ ಸ್ನೇಹದಿ ಹಾಡುತ ಕುಣಿಯಲಿ
ಇಂದಾಗುತ ಒಟ್ಟು

ಅಣುಬಾಂಬನು ಸ್ಫೋಟಿಸುವ ಮನಗಳಲಿ
ಮೂಡಲಿ ಹೊಸ ಕವನ
ಮಾನವತೆಯು ಮೆರೆದಾಡಲಿ ಹಾಡಲಿ
ಶತಮಾನದ ಗಾನ

ಜನನ ಮರಣಗಳ ನಡುವಣ ಜೀವನ
ಸಾರ್ಥಕವಾಗಲೆ ಬೇಕು
ಧನವಂತರ ಹಣ ಕವಿಗಳ ಚಿಂತನ
ಲೋಕಕೆ ನೀಡಲಿ ಬೆಳಕು

೦೧-೦೧-೨೦೦೧
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವೇ ಕಾಡಬೇಡ ನನ್ನ!
Next post ನಗೆ ಡಂಗುರ – ೨೩

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys